ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇದರ 101 ನೇ ವಾರ್ಷಿಕ ಅಧಿವೇಷನದಲ್ಲಿ 2017ನೇ ಸಾಲಿನ ರಾಜ್ಯಮಟ್ಟದ 'ಜ್ಯೋತಿ ಪುರಸ್ಕಾರ' ವನ್ನು ಶ್ರೀಯುತ ಶಿವಕುಮಾರ ಬಿ.ಎ. ಅಳಗೋಡು ಇವರಿಗೆ ನೀಡಿ ಗೌರವಿಸಲಾಯಿತು. ಸೆಪ್ಟೆಂಬರ್ 25 ನೇ ತಾರೀಕು ತಲಪಾಡಿಯಲ್ಲಿ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮನು ಬಳಿಗಾರ್ ಶಿವಕುಮಾರರಿಗೆ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಜ್ಯೋತಿ ಪುರಸ್ಕಾರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀಯುತ ಪ್ರದೀಪ್ ಕಲ್ಕೂರ, ನೀಲಾವರ ಸುರೇಂದ್ರ ಅಡಿಗ ಮತ್ತಿತರರು ಉಪಸ್ಥಿತರಿದ್ದರು.
ಬುಧವಾರ, ಅಕ್ಟೋಬರ್ 25, 2017
ಶಿವಕುಮಾರ ಬಿ.ಎ. ಅಳಗೋಡು ಇವರಿಗೆ 2017 ನೇ ಸಾಲಿನ 'ಜ್ಯೋತಿ ಪುರಸ್ಕಾರ'
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇದರ 101 ನೇ ವಾರ್ಷಿಕ ಅಧಿವೇಷನದಲ್ಲಿ 2017ನೇ ಸಾಲಿನ ರಾಜ್ಯಮಟ್ಟದ 'ಜ್ಯೋತಿ ಪುರಸ್ಕಾರ' ವನ್ನು ಶ್ರೀಯುತ ಶಿವಕುಮಾರ ಬಿ.ಎ. ಅಳಗೋಡು ಇವರಿಗೆ ನೀಡಿ ಗೌರವಿಸಲಾಯಿತು. ಸೆಪ್ಟೆಂಬರ್ 25 ನೇ ತಾರೀಕು ತಲಪಾಡಿಯಲ್ಲಿ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮನು ಬಳಿಗಾರ್ ಶಿವಕುಮಾರರಿಗೆ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಜ್ಯೋತಿ ಪುರಸ್ಕಾರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀಯುತ ಪ್ರದೀಪ್ ಕಲ್ಕೂರ, ನೀಲಾವರ ಸುರೇಂದ್ರ ಅಡಿಗ ಮತ್ತಿತರರು ಉಪಸ್ಥಿತರಿದ್ದರು.
ಭಾನುವಾರ, ಅಕ್ಟೋಬರ್ 22, 2017
ಕಲಾತಪಸ್ವಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಯಕ್ಷಯಾನದ ಕೊನೆಯ 5 ಪೌರಾಣಿಕ ಪಾತ್ರಗಳು -
(ಶ್ರೀ ಬಂಗಾರಮಕ್ಕಿ ವೀರಾಂಜನೇಯ ದೇವರ ಸನ್ನಿಧಿಯಲ್ಲಿ)ಶ್ರೀದೇವಿಮಹಾತ್ಮೆಯ 'ವಿದ್ಯುನ್ಮಾಲಿ' 21/09/2017
ರಾಜಸೂಯಾಧ್ವರದ 'ಮಾಗದ' 22/09/2017
ಮಹೀಂದ್ರ ಮಹಾಭಿಷ ಪ್ರಸಂಗದ 'ಬ್ರಹ್ಮ' 23/09/2017
ಶರಸೇತು ಬಂಧದ 'ಅರ್ಜುನ' 24/09/2017
ವಸುವರಾಂಗಿ ಪ್ರಸಂಗದ 'ಶಂತನು' 25/09/2017
ವಿಧಿವಶರಾಗಿದ್ದು : 03/10/2017 ರಾತ್ರಿ 9:30
ಕೃಪೆ : ಬಂಗಾರಮಕ್ಕಿ ದೇವಸ್ಥಾನ
ಶುಕ್ರವಾರ, ಅಕ್ಟೋಬರ್ 6, 2017
ಅಮೃತದ ಕಡಲು ಗೋವಿನೊಡಲು
|| ಭಾಮಿನಿ ಷಟ್ಪದಿ ||
ಎತ್ತಿದಾ ಕೂರಸಿಯು ಕತ್ತರಿ |
ಸಿತ್ತು ಗೋವಿನ ಕುಸುಮ ಕತ್ತನು |
ನೆತ್ತರಿನ ಹೊಳೆ ಹರಿದು ಹೋಯಿತು | ಅತ್ತವರ ಕಾಣೆ ||
ನೆತ್ತಿಯಂಚಿನ ಕತ್ತಿಯರಿಯದೆ |
ವಿತ್ತಕಷ್ಟೇ ಚಿತ್ತವಾಯಿತು |
ಮತ್ತಜನರರಿಯದೆಯೆ ಕೊಲುವರು | ಸುತ್ತುತಿಹ ಸಾವ! || 1 ||
ದಯೆಯೆ ಧರ್ಮದ ಮೂಲವೆಂಬರು |
ದಯೆಯ ಮರೆಯುತ ಕೊಂದು ಕಳೆವರು |
ದಯೆಯ ಪರಿಧಿಗೆ ಭಯದ ಪರದೆಯನೆಳೆದು ಮೆರೆಯುವರು ||
ಜಯತು ಜಯವೆಂದೊರೆವ ಜನಕಪ |
ಜಯವ ಹಾರೈಸುತಲಿ ನಡೆವರ |
ಪಯಣದಲಿ ತಿರುತಿರುಗಿ ಕಂಡರೆ ಪಾಪದಾ ಮೂಟೆ! || 2 ||
ಚಿಕ್ಕ ಹೊನ್ನಿನ ತತ್ತಿಯಿಕ್ಕಿದ |
ಕುಕ್ಕುಟವ ನರನೋರ್ವನಾರ್ಜಿಸೆ |
ಹೊಕ್ಕಿತಾಸೆಯು ಗರ್ಭದೊಳಗಿನ್ನೇಸು ಇಹುದೆನುತ ||
ಸಿಕ್ಕದಾಯಿತು ದಕ್ಕದಾಯಿತು |
ಮಕ್ಕಳಾಟಿಕೆಯಾಗಿ ಹೋಯಿತು |
ಸೊಕ್ಕಿನಿಂ ಗೋವನ್ನು ಕೊಂದರೆ ನೀನು ಇಂತಪ್ಪೆ
|| 3 ||
|| 3 ||
ಹಾಲನುರೆ ಚಪ್ಪರಿಸುತೀಜನ |
ಹಾಲನಿತ್ತಾಕೆಯನೆ ಕಡಿವರು |
ಬಾಳ ಬೆಲೆಯೆಷ್ಟರ್ಥವಾಪುದು ಬಾಳ ಕುರುಡರಿಗೆ? ||
ಕಾಲನೆಳೆವರು ಗೋಣ ಮುರಿವರು |
ಕಾಳಿನಷ್ಟೂ ನಲ್ಮೆದೋರರು |
ಹೇಳಿರೈ ನೀವ್ ತಡೆಯಿರೈ ನೀವ್ ನರಕ ನಿಮಗೆನುತ || 4 ||
ಮೊಸರು ಮಜ್ಜಿಗೆ ಹಾಲು ತುಪ್ಪದ |
ರಸವ ಹೀರುತಲುದಯಿಸಿದ ಜನ |
ಪಶುವಿನುದರವ ಬಗೆವ ಪರಿಯನು ಕಾಣೆನೀಜಗದಿ ||
ಕುಶಲದಿಂದಾ ಪಶುವ ಸಲಹಲು |
ಬಿಸಜಸುತನುರಿಗಣ್ಣ ಮುರರಿಪು |
ಜಸವನೆರೆವರು ಕುಂಭಿನಿಯೊಳೀ ನುಡಿಯು ಕಡುದಿಟವು || 5 ||
- ಶಿವಕುಮಾರ ಬಿ.ಎ. ಅಳಗೋಡು
ಕನ್ನಡ ಉಪನ್ಯಾಸಕರು, ಪಿ.ಪಿ.ಸಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)