ಭಾನುವಾರ, ಅಕ್ಟೋಬರ್ 14, 2018

Chittani - ಚಿಟ್ಟಾಣಿಯವರ ಕೊನೆಯ ದಿನಗಳು ಕೃತಿಯು ಬಿಡುಗಡೆಗೂ ಮೊದಲೇ ಮರುಮುದ್ರಣ ಕಂಡಿದೆ













ಚಿಟ್ಟಾಣಿಯವರ ಕೊನೆಯ ದಿನಗಳು ಕೃತಿಯು ಬಿಡುಗಡೆಗೂ ಮೊದಲೇ ಭಾರೀ ಬೇಡಿಕೆಯನ್ನು ಸೃಷ್ಟಿಸಿ ಮರುಮುದ್ರಣ ಕಂಡಿದೆ. ಇದೇ ಅಕ್ಟೋಬರ್ ತಿಂಗಳ 28 ರ ಭಾನುವಾರ ಸಂಜೆ 6 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿಶಿಷ್ಟವಾಗಿ ಲೋಕಾರ್ಪಣೆಗೊಳ್ಳಲಿದೆ. ಎಲ್ಲರೂ ದಯಮಾಡಿ ಆಗಮಿಸಿ, ಪ್ರೋತ್ಸಾಹಿಸಿ.

ಸೂಚನೆ : ಕೃತಿಯ ಮೊದಲ ಮುದ್ರಣದ ಬೆಲೆ 100ರೂ. ಈ ಮುದ್ರಣದ ಪುಸ್ತಕಗಳು ಇನ್ನು ಕೆಲವೇ ಕೆಲವಷ್ಟೇ ಉಳಿದಿವೆ. ದ್ವಿತೀಯ ಮುದ್ರಣದ ಬೆಲೆ 150ರೂ. (ಅತೀ ತುರ್ತಿನಲ್ಲಿ ಮರುಮುದ್ರಣ ಮಾಡಿಸಿದ್ದರಿಂದ ಖರ್ಚು ಹೆಚ್ಚಿತು ಆದ್ದರಿಂದ)

ಪುಸ್ತಕ ಬಿಡುಗಡೆಯ ದಿನ ಮರುಮುದ್ರಣದ, ಅಂದರೆ, 150ರೂ ಪುಸ್ತಕವು 10% ರಿಯಾಯಿತಿ ದರದಲ್ಲಿ ದೊರೆಯುತ್ತದೆ. ಈ ಕೂಡಲೇ ತಾವು ಆರ್ಡರ್ ಮಾಡಿದರೆ 100ರೂ + 10 ರೂ ಅಂಚೆವ್ಯಚ್ಛದಲ್ಲಿ ಪುಸ್ತಕ ತಲುಪುತ್ತದೆ. ಸಂಪರ್ಕಿಸಿ : 9482703082 ಈ ಪುಸ್ತಕ ಕೇವಲ ಬೆರಳೆಣಿಕೆಯಷ್ಟಿದೆ. ಮೊದಲು ತಿಳಿಸಿದವರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತೇನೆ.

ಮಾಹಿತಿಯನ್ನು ದಯಮಾಡಿ ಎಲ್ಲಾ ಆಸಕ್ತ ಓದುಗರಿಗೂ ಶೇರ್ ಮಾಡಿ. ಪುಸ್ತಕ ಪಡೆದುಕೊಳ್ಳಲು ಸೂಚಿಸಿ. ವಂದನೆಗಳು

ಬುಧವಾರ, ಅಕ್ಟೋಬರ್ 10, 2018

Chittani Ramachandra Hegade - 'ಚಿಟ್ಟಾಣಿಯವರ ಕೊನೆಯ ದಿನಗಳು' ಕೃತಿ ಅನಾವರಣ


ಆತ್ಮೀಯರೆ,


ಇದೇ ಅಕ್ಟೋಬರ್ 28ರ ಭಾನುವಾರ ಸಂಜೆ 6 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಚಿಟ್ಟಾಣಿ ಸಂಸ್ಮರಣ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದ ಶುಭ ಸಂದರ್ಭದಲ್ಲಿ ನನ್ನ ಕನಸಿನ ,ಬಹು ಜನರ ನಿರೀಕ್ಷೆಯ ಕೃತಿಯಾದ 'ಚಿಟ್ಟಾಣಿಯವರ ಕೊನೆಯ ದಿನಗಳು' ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಸಾಂಕೇತಿಕವಾಗಿ ಬಿಡುಗಡೆಗೊಂಡು, ವಿದ್ಯುಕ್ತ ಅನಾವರಣಕ್ಕಿಂತ ಮೊದಲೇ ಮರುಮುದ್ರಣವನ್ನು ಕಂಡಿರುವ ಈ ಕೃತಿ ಇನ್ನು ಮುಂದಕ್ಕೆ ಪ್ರೀತಿಯ ಓದುಗರಾದ ನಿಮ್ಮ ಆಸ್ತಿ. ಪದ್ಮಶ್ರೀ ಚಿಟ್ಟಾಣಿಯವರ, ಯಕ್ಷಗಾನ ಕಲೆಯ ಸಮಸ್ತ ಅಭಿಮಾಮಿಗಳಿಗೆ ಇದೊಂದು ಅತ್ಯಾಪ್ತ ಹೊತ್ತಗೆಯಾಗುವುದರಲ್ಲಿ ಸಂಶಯವಿಲ್ಲ. ನಮ್ಮ ನಾಡಿನಲ್ಲಷ್ಟೇ ಅಲ್ಲದೇ ಹೊರರಾಜ್ಯಗಳಿಂದಲೂ ಭಾರೀ ಬೇಡಿಕೆಯನ್ನು ಪಡೆಯುತ್ತಿರುವ ಈ ಪುಸ್ತಕವನ್ನು ನೀವೆಲ್ಲರೂ ಮೆಚ್ಚಿಕೊಳ್ಳುತ್ತೀರೆಂಬ ಭರವಸೆ ನನಗಿದೆ. ದಯಮಾಡಿ ಎಲ್ಲಾ ಸಾಹಿತ್ಯ-ಕಲಾ-ಸಹೃದಯರೂ ಕಾರ್ಯಕ್ರಮಕ್ಕೆ ಬಂದು ಹರಸಿ-ಹಾರೈಸಿರಿ. ಇದುವೇ ತಮಗೆಲ್ಲರಿಗೂ ಅಕ್ಕರೆಯ-ಸಕ್ಕರೆಯ ಕರೆಯೋಲೆ. ನಿಮ್ಮ ಮನೆ ಮಗನ ಕಾರ್ಯಕ್ರಮವೆಂದು ಬಂದು, ಪುಸ್ತಕವನ್ನು ಕೊಂಡು ಪ್ರೋತ್ಸಾಹಿಸಿ.

ಈ ಕೃತಿಯು ಆನ್ಲೈನ್ನಲ್ಲಿಯೂ ಲಭ್ಯವಿದೆ. ಈ ಲಿಂಕ್ ಬಳಸಿ - https://goo.gl/KAz7R1
ಪುಸ್ತಕಗಳಿಗಾಗಿ ಸಂಪರ್ಕಿಸಿರಿ : 9482703082