ಸೋಮವಾರ, ಏಪ್ರಿಲ್ 24, 2017

ಶಿವಕುಮಾರ ಬಿ.ಎ. ಅಳಗೋಡು ಅವರ ಮಹೀಂದ್ರ ಮಹಾಭಿಷ’ ಮತ್ತು ‘ಮುನ್ನುಡಿ’ ಕೃತಿಗಳ ಬಿಡುಗಡೆ


ಶಿವಕುಮಾರ ಬಿ.. ಅಳಗೋಡು ಅವರ ಮಹೀಂದ್ರ ಮಹಾಭಿಷಮತ್ತುಮುನ್ನುಡಿಕೃತಿಗಳ ಬಿಡುಗಡೆ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿ ದಿನಾಂಕ: 19-4-2017 ರಂದು ದ್ವಿತೀಯ ವರ್ಷದ ಕನ್ನಡ ಎಂ.. ವಿದ್ಯಾರ್ಥಿ ಶಿವಕುಮಾರ್ರವರಮಹೀಂದ್ರ ಮಹಾಭಿಷಮತ್ತುಮುನ್ನುಡಿಎಂಬ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ನಡೆಯಿತುಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ ಅವರು ಎರಡು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ, ಪುಸ್ತಕಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶಿವಕುಮಾರ್ ಅವರನ್ನು ಸನ್ಮಾನಿಸಿದರು. ಕನ್ನಡದ ಪ್ರಸಿದ್ಧ ವಿದ್ವಾಂಸರು ಮತ್ತು ನಿವೃತ್ತ ಪ್ರಾಂಶುಪಾಲರೂ ಆದ ಪ್ರೊ. ಪಾದೇಕಲ್ಲು ವಿಷ್ಣುಭಟ್ ಅವರು ಯಕ್ಷಗಾನ ಕೃತಿಯಾದಮಹೀಂದ್ರ ಮಹಾಭಿಷ ಬಗ್ಗೆ ಮಾತನಾಡಿದರು. ಕನ್ನಡದ ಯಕ್ಷಗಾನದ ಚರಿತ್ರೆಯನ್ನು ತಿಳಿಸುತ್ತಲೇ ಶಿವಕುಮಾರ್ ಅವರ ಯಕ್ಷಗಾನ ಕೃತಿ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದರು. ‘ ಹಿಂದಿನ ಕವಿಗಳ ಕೃತಿಗಳನ್ನು ಚೆನ್ನಾಗಿ ಓದಿಕೊಂಡಇರುವುದು ಅವರ ರಚನೆಯಿಂದ ತಿಳಿಯುತ್ತದೆ. ಛಂದೋಬದ್ಧವಾಗಿ ಸಣ್ಣದಾದ ಕಥೆಯನ್ನೇ ಸೊಗಸಾಗಿ ನಿರೂಪಿಸಿದ್ದಾರೆ. ಇಂದಿನ ದಿನಗಳಲ್ಲಿ ಯಾರಿಂದಲೋ ಪದ್ಯಬರೆಸಿ ಪ್ರಸಂಗ ಕತೃಗಳೆಂದು ಕರೆಸಿಕೊಳ್ಳುತ್ತಿರುವವರೆದುರು ಶಿವಕುಮಾರರು ವಿಶಿಷ್ಟವಾಗಿ ಎದ್ದು ಕಾಣಿಸಿಕೊಳ್ಳುತ್ತಾರೆ. ನಡುಗನ್ನಡ, ಹೊಸಗನ್ನಡ ಭಾಷಾಬಳಕೆಯಿಂದ ಪ್ರಸಂಗದ ಮಹತ್ವ ಹೆಚ್ಚಿದೆ. ಇವರಿಂದ ಇನ್ನೂ ಅನೇಕ ಮೌಲಿಕ ಕೃತಿಗಳು ರಚನೆಗೊಳ್ಳಲಿ’ ಎಂದರು. ತೆಂಕನಿಡಿಯೂರು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಎಚ್.ಕೆ. ವೆಂಕಟೇಶ ಅವರು ಶಿವಕುಮಾರ್ ಅವರ ಮತ್ತೊಂದು ಕೃತಿಮುನ್ನುಡಿಕುರಿತ  ಅವಲೋಕನ ಮಾಡಿದರು. ‘ಇದೊಂದು 17 ಲೇಖನಗಳ ಪುಸ್ತಕವಾಗಿದೆ. ಮೇಲ್ನೋಟದಿಂದ ಬಿಡಿ ಲೇಖನಗಳಂತೆ ಕಾಣಿಸಿದರೂ ಎಲ್ಲಕ್ಕೂ ಅನುಕ್ರಮ ಸಂಬಧವಿದೆ. ‘ಕವಿಯಾದವನು ಎಲ್ಲವನ್ನೂ ಕಾಣಬೇಕು’ ಆ ನೆಲೆಯಿಂದಲೇ ಕೆಲವು ಲೇಖನಗಳನ್ನು ಬರೆದೆ ಎಂದು ಕೃತಿಕಾರರೇ ಹೇಳಿಕೊಂಡಿದ್ದಾರೆ. ಅದರಂತೆ, ಮದುವೆ ಎಂದರೆ, ಹೆಂಡತಿಯ ಅಲಂಕಾರದಲ್ಲಿ ಗಂಡ ಬೇಸತ್ತು ಹೋದ ಬಗೆಗೆ, ಹೆಣ್ಣಿನ ಇಂದಿನ ನಿಜಸ್ಥಿತಿಯ ಬಗೆಗೆ ಹೀಗೆ ಕಲ್ಪಿಸಿ ಕಂಡ ಲೇಖನಗಳಿಲ್ಲಿವೆ. ಕುವೆಂಪುರವರ ಶ್ರೀರಾಮಾಯಣದರ್ಶನಂ ಕೃತಿಯಲ್ಲಿ ಬರುವ ಮಂಥರೆ ಮತ್ತು ಊರ್ಮಿಳೆಯ ಪಾತ್ರದಿಂದ ಪ್ರೇರಣೆಗೊಂಡು ಇಲ್ಲಿನ ‘ಮಾತಾಡು ಊರ್ಮಿಳಾ’, ‘ತಪ್ಪಿಲ್ಲ ನಿನ್ನೊಳು ಮಂಥರಾ’ ಲೇಖನ ಅತ್ಯಂತ ಸೊಗಸಾಗಿ ರಚನೆಗೊಂಡಿವೆ. ‘ಭಾರತದ ಕರ್ಣ’ ಪಂಪ, ಕುಮಾರವ್ಯಾಸ ಭಾರತದಲ್ಲಿ ಕರ್ಣನನ್ನು ಕಂಡ ಬಗೆಯನ್ನು ತಮ್ಮ ನೆಲೆಯಲ್ಲಿ ಲೇಖಕರು ಚಿತ್ರಿಸಿದ್ದಾರೆ. ಇದೊಂದು ಸುಂದರ ಲೇಖನವಾಗಿದ್ದು ವಿದ್ಯಾರ್ಥಿಗಳಿಗೆ ಸಮರ್ಥವಾದ ಪರಾಮರ್ಶನ ಲೇಖನವೂ ಆಗಿದೆ. ಸೃಜನಶೀಲ ಕೃತಿಯಾದ ಈ ಲೇಖನಮಾಲಿಕೆಯಲ್ಲಿನ ಎಲ್ಲಾ ಲೇಖನಗಳೂ ಓದಲೇಬೇಕಾದವುಗಳಾಗಿವೆ. ಕೆಲವಷ್ಟು ಲೇಖನಗಳು ಮತ್ತೆ ಮತ್ತೆ ಓದಿಸಿಕೊಳ್ಳುವಂತಿವೆ’ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿಕೊಂಡು ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳ ಮೂಲಕ ಕ್ರಿಯಾಶೀಲರಾಗಿ ಕಾಲೇಜಿನ ಘನತೆಯನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು. ಲೇಖಕ ಶಿವಕುಮಾರರು ಕೃತಿಗಳ ಅಭಿವ್ಯಕ್ತಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರುಆಂಗ್ಲವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರಸಾದ್ ರಾವ್ ಎಂ. ಶುಭ ಹಾರೈಸಿದರು. ಕನ್ನಡ ಸಹ ಪ್ರಾಧ್ಯಾಪಕಿ  ಡಾ. ನಿಕೇತನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ರಶ್ಮಿಶ್ರೀ ಪ್ರಾರ್ಥಿಸಿದರು. ಸುಹಾಸ್ ಶೆಟ್ಟಿ ನಿರೂಪಿಸಿದರುಚಂದನಾ ಕೆ.ಎಸ್. ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ